Wednesday, November 5, 2008

ಮಂಕುತಿಮ್ಮನ ಕಗ್ಗ ( ಆಯ್ದ ಸಾಲುಗಳು)

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ - ಮಂಕುತಿಮ್ಮ ।।
*************
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |

ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||

*****************

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ |
ಕರುಬಿ ಜನ ಕೆಸರು ದಾರಿಯಲಿ ಸಾಗುವುದು |
ಬಿರುದ ಗಲಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ||

*********************

ಮನೆಯೊಳೋ ಮಠದಳೋ ಸಭೆಯೊಳೋ ಸಂತೆಯೊಳೊ|
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ||
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು|
ನೆನೆಯದಾತ್ಮದ ಸುಖವ-ಮಂಕುತಿಮ್ಮ||

********************

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು|
ಒಳಿತನಾಗಿಸು, ಕೊಡುತ ಕೊಳುತ ಸಂತಸವ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು|
ಮಿಳಿತನಿರು ವಿಶ್ವದಲಿ- ಮಂಕುತಿಮ್ಮ||

***************

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಗಿಪುದು - ಮಂಕುತಿಮ್ಮ||

*************************

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|
ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
ವಿವರಗಳ ಜೋಡಿಸುವ ಯಜಮಾನ ಬೇರಿಹನು|
ಸವೆಸು ನೀಂ ಜನುಮವನು- ಮಂಕುತಿಮ್ಮ||

****************

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ|
ತತ್ತ್ವದರ್ಶನವಹುದು- ಮಂಕುತಿಮ್ಮ||

*************************

ಅರೆದಿನದ ನಮ್ಮ ಯತ್ನದಿನದೇನೆನ್ನದಿರು|
ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ?|
ಕಿರುಜಾಜಿ ಸೊಗಕೊಡದೆ?- ಮಂಕುತಿಮ್ಮ||

****************************

ಉದರದೈವಕೆ ಜಗದೊಳೆದುರು ದೈವದದೆಲ್ಲಿ|
ಮೊದಲದರ ಪೂಜೆ;ಮಿಕ್ಕೆಲ್ಲವದರಿಂದ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ|
ಹದದೊಳಿರುಸುವುದೆಂತೊ?- ಮಂಕುತಿಮ್ಮ||

**************************

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ|
ಬಿಡಿಗಾಸು ಹೂವಳಗೆ- ಮಂಕುತಿಮ್ಮ||

*****************************

ಮನವನಾಳ್ವುದು ಹಟದ ಮಗುವನಾಳುವ ನಯದೆ|
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು|
ಇನಿತಿತ್ತು ಮರೆಸಿನಿತ- ಮಂಕುತಿಮ್ಮ||

****************************

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ|
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ||
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು|
ಇಳೆಯೊಳಗದೊಂದು ಸೊಗ- ಮಂಕುತಿಮ್ಮ||

**************

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ|
ತಳದ ಕಸ ತೇಲುತ್ತ ಬಗ್ಗಡವದಹು||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ|
ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ||

*****************

ಒಡೆಯದಿರು ತಳಹದಿಯ ಸರಿವಡಿಪೆನದನೆಂದು|
ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ?|
ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ||

*****************

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?|
ಓಲೆಗಳನವರವರಿಗೈದಿಸಿರೆ ಸಾಕು||
ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ|
ಕಾಲೋಟವವನೂಟ- ಮಂಕುತಿಮ್ಮ||

********************

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು|
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು|
ಬಗೆಯಲರಿತವನೆ ಸುಖಿ- ಮಂಕುತಿಮ್ಮ||








ಕವಿನಮನ


ಸ್ನೇಹಿತರೇ,
ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿತ್ತು ಹಾಗು ಅಷ್ಟೆ ಸೊಗಸಾಗಿತ್ತು ಕೂಡ .
ಹೆಚ್ ಎಸ್.ವೆಂಕಟೇಶ ಮೂರ್ತಿ, ಎಂ.ಏನ್.ವ್ಯಾಸರಾವ್,ಕಂಬಾರ,ಲಕ್ಷ್ಮಿ ನಾರಾಯಣ ಭಟ್ಟರು ..... ಇವರನ್ನೆಲ್ಲಾ ಬಹುದೇಕ ಮರೆತೆಬಿಟ್ಟುರುವ ನಮ್ಮಂಥ ಕನ್ನಡಿಗರಿಗೆ ಅವರ ಕನ್ನಡ ದಿನದ ದಿನ ಅವರ ಪರಿಚಯ ಮಾಡಿಕೊಟ್ಟಿದ್ದು ನಿಜಕ್ಕೂ ಗ್ರೇಟ್.
ಅವರ ಬಾಲ್ಯ,ವಿದ್ಯಾಭ್ಯಾಸ,ಜೀವನ ಶೈಲಿ, ರಚನೆಗಳು, ಬಾಳ ಪಯಣದ ಹಾದಿಯಲ್ಲಿ ಎದುರಾದ ಘಟನೆಗಳು,......... ಹೀಗೆ ಹಿರಿಯ ಕವಿಗಳ ಸಮಗ್ರ ಚಿತ್ರದ ದರ್ಶನ ಮಾಡಿದಂತಾಯಿತು
ಇನ್ನು ರವಿಬೆಳಗೆರೆ. ಕೇವಲ ಕ್ರೈಂ ಆಧಾರಿತ ಲೇಖನಗಳು,ಕತೆಗಳಿಗಷ್ಟೇ ಸಮರ್ಥ-ಎಂಬುದು ಎಷ್ಟೋ ಮಂದಿ ರವಿಗೆ ಕೊಟ್ಟಿರುವ ಬಿರುದು.ಅಂಥಹವರು ಒಮ್ಮೆ ಈ ಕಾರ್ಯಕ್ರಮವನ್ನು ಖಂಡಿತ ನೋಡಿರಬೇಕಿತ್ತು.ರವಿಯ ನಿರೂಪಣ ಶೈಲಿ,ಪದಪ್ರಯೋಗ,ಭಾಷೆಯ ಮೇಲಿನ ಹಿಡಿತ,ಮುಖ್ಯವಾಗಿ ಒಬ್ಬಬ್ಬ ಲೇಖಕರ ಬಗ್ಗೆಯೂ ಕೊಡುತ್ತಿದ್ದ ಮುನ್ನುಡಿ,ಅವರ ಸಮಗ್ರ ಪರಿಚಯ....ವಾವ್.... ನಿಜವಾಗಿಯು ಕ್ರೈಂ ಪತ್ರಕರ್ತನ ಒಳಗೊಬ್ಬ ಭಾವಜೀವಿಯ ದರ್ಶನ ಮಾಡಿಸಿತು.
ಇನ್ನು ರವಿಗೆ ತಕ್ಕ ಸಾಥ್ ನೀಡಿದವರು ಗಾನಬ್ರಹ್ಮ ಎಸ್.ಪಿ.ಬಿ.ಆಹಾ.ಭಾವಗಿತೆಗಳನ್ನು ಹಾಡುವಾಗ ಆತನ ತನ್ಮಯತೆ ,ಹೊಸ ಗಾಯಕರಿಗೆ ತುಂಬುತ್ತಿದ್ದ ವಿಶ್ವಾಸ,ತಾನೆ ಮಾಡುತ್ತಿದ್ದ ಹಾಸ್ಯ,ಒಂದಕಿಂತ ಒಂದು....ಗ್ರೇಟ್..........
ಎಲ್ಲೋ ಎಸ್ಟೋ ದಿನಗಳ ಹಿಂದೆ ದೂರದರ್ಶನದಲ್ಲಿ ಎಂ.ಎಸ್.ಐ.ಎಲ್ .ನಿತ್ಯೋತ್ಸವ ಎಂಬ ಕಾರ್ಯಕ್ರಮ ನೋಡಿದ್ದರ ನೆನಪು.
ಬಹಳ ದಿನಗಳ ನಂತರ ಮತ್ತೆ ಭಾವ ಗೀತೆ ಗಳ ಕಾರ್ಯಕ್ರಮೊಂದನ್ನು ನೋಡಿದ ಖುಷಿ.......


ನಿಮ್ಮಲ್ಲಿ ಯಾರಾದರು ಇದನ್ನು ನೋಡಿದ್ದರೆ ನಿಮಗೆ ಇಸ್ತವಾಯಿತೆ.... ನಿಮ್ಮ ಅನಿಸಿಕೆ ತಿಳಿಸಿ ..............

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...