Wednesday, July 6, 2016

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...