Sunday, April 14, 2019

ಮಹಾಭಾರತದಲ್ಲಿ ಬಿಟ್ಟು ಹೋದ ಒಂದು ಸಣ್ಣ ಕಥೆ

ಮಹಾಭಾರತದಲ್ಲಿ ಬಿಟ್ಟು ಹೋದ ಒಂದು ಸಣ್ಣ ಕಥೆ : ಒಮ್ಮೆ ದೇವಕನ್ಯೆಯರಾದ ಊರ್ವಶಿ ಹಾಗು ಮೇನಕೆ ಜಲಕ್ರೀಡೆಯಾಡುತ್ತಿರಲು ಬೇಟೆಗಾಗಿ ಅಲ್ಲಿಗೆ ಬಂದ ಮನ್ಮಥನು ಅವರನ್ನು ಕಂಡು ಮೋಹಗೊಂಡನು ಹಾಗು ತಾನು ಆ ದೇವ ಕನ್ಯೆಯರನ್ನು ವಿವಾಹವಾಗಲು ನಿಶ್ಚಯಿಸಿ ಮೇನಕೆಯ ಬಳಿ ತನ್ನ ಮನದ ಇಂಗಿತವನ್ನು ತಿಳಿಸಿದನು. ಮನ್ಮಥನನ್ನು ಕಂಡು ವಿರಹ ವೇದನೆಯಿಂದ ಬಳಲುತ್ತಿದ್ದ ಮೇನಕೆಯು ತಾನು ಮನ್ಮಥನನ್ನು ವಿವಾಹವಾಗಲು ಒಪ್ಪಿದಳು. ತಕ್ಷಣವೇ ಅವರು ಗಾಂಧರ್ವ ರೀತಿಯಿಂದ ವಿವಾಹವಾದರು. ಇದನ್ನು ತಿಳಿದ ಇಂದ್ರನು ಮನ್ಮಥನಿಗೆ ಮುಂದೆ ಕಲಿಯುಗದಲ್ಲಿ ಭೂಲೋಕದಲ್ಲಿ ಜನ್ಮ ತಾಳುವಂತೆ ಶಾಪವಿತ್ತನು. ಮನ್ಮಥನು ಭಯದಿಂದ ಹೆದರಿ ಇಂದ್ರನಲ್ಲಿ ಶರಣಾಗಲು ಪ್ರಸನ್ನನಾದ ಇಂದ್ರನು ಮನ್ಮಥನಿಗೆ ವಿಶಾಪವನ್ನಿತ್ತನು. ತಾನು ಕೊಟ್ಟ ಶಾಪವನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ ಆದರೆ ಭೂಲೋಕದಲ್ಲಿ ಜನಿಸಿದಾಗ ಕೂಡ ಮನ್ಮಥ ಸುಂದರ ರೂಪದಲ್ಲೇ ಜನಿಸುವುದಾಗಿಯು ವಿಶಾಪವನ್ನಿತ್ತನು. ಹೀಗೆ ಇಂದ್ರನ ವಿಶಾಪದಿಂದ ಸಂತೋಷಗೊಂಡ ಮನ್ಮಥನು ಕಲಿಯುಗದಲ್ಲಿ 1983 ನೆ ಇಸವಿಯಲ್ಲಿ ಜನ್ಮತಾಳಿದನು. ಈ ಕತೆಯ ಎಳೆಯನ್ನು ಹಿಡಿದು ಹೊರಟ tv ಚಾನಲ್ ಒಬ್ಬರಿಗೆ ಕಲಿಯುಗದ ದಿ ಮೋಸ್ಟ್ ಹ್ಯಾಂಡ್ಸಂ ಯುವಕನ ಫೋಟೋ ಒಂದು ದೊರೆತಿದ್ದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದಾರೆ. ಈ ಸುಂದರ ಯುವಕನನ್ನು ನೋಡಲೆಂದೇ ಸುಂದರ ರೂಪದ ಕನ್ನಿಕೆಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಗಿಬಿದ್ದು tv ನೋಡಲಾರಂಭಿಸಿ TRP ರೇಟ್ ಯದ್ವಾತದ್ವಾ ಜಾಸ್ತಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ವಾಗಲಾರಂಭಿಸಿದೆ. ಮಾಧ್ಯಮಗಳಿಗೆ ದೊರೆತ ಆ ಸುಂದರ ಯುವಕನ ಫೋಟೋ ಸ್ಯಾಂಪಲ್ ಒಂದು ಇಲ್ಲಿದೆ: ಹುಡುಗ ಇಷ್ಟ ಆದ್ರೆ ಲೈಕಿಸಿ ತುಂಬಾ ಇಷ್ಟ ಆದ್ರೆ ಕಾಮೆಂಟಿಸಿ.

No comments:

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...